ಬೆಂಗಳೂರು ಸಿಟಿ ಸೂಪರ್ ಸ್ಟಾರ ರಜಿನಿಕಾಂತ್ ಅಭಿಮಾನಿಗಳು ಪ್ರೀತಿಯ ಲೋಕ ಚಿತ್ರಕ್ಕಾಗಿ ಕಪಾಲಿ ಚಿತ್ರಮಂದಿರದಲ್ಲಿ ನಿಲಿಸಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಹಾಗು ಭಾರಿ ಹೂವಿನ ಹಾರಗಳನ್ನು ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಶ್ರೀರಾಮಪುರ, ಓಕಳಿಪುರ,ರಾಮಚಂದ್ರಪುರ ದಿಂದ ಬಂದಂತ ೧೫೦ಕ್ಕೂ ಹೆಚ್ಚುಭಿಮಾನಿಗಳು ಸೂಪರ್ ಸ್ಟಾರ ರಜಿನಿಕಾಂತ್ಗೆ ಜಯಕಾರ ಕೂಗುತ್ತಾ ತಮ್ಮ ನೆಚ್ಚಿನ ನಟನ ಬೃಹತ್ ಗಾತ್ರದ ಕಟೌಟ್ ನಿಲ್ಲಿಸಿದ್ದಕ್ಕೆ ಪ್ರೀತಿಯ ಲೋಕ ಚಿತ್ರದ ನಿರ್ದೇಶಕ ನಂದನ್ ಪ್ರಭುರವರಿಗೆ ಅಭಿನಂದನೆ ಸಲ್ಲಿಸಿ ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಹಾಜರಿದ್ದ ಚಿತ್ರದ ನಾಯಕ ವಿನಯ್ ಮತ್ತು ನಿರ್ದೇಶಕ ನಂದನ್ ಪ್ರಭು ಜೊತೆ ಕುಳಿತು ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು ಕಿಕ್ಕಿರಿದ ಅಭಿಮಾನಿಗಳ ಹಬ್ಬದ ವಾತಾವರಣದಿಂದ ಕೆಲಹೊತ್ತು ಎಸ್ ಪಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ನಿಂದಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಜಿನುಗುತಿದ್ದ ಮಳೆಯನ್ನು ತಮ್ಮ ನೆಚ್ಛಿನ ನಟನ ಭಾವಚಿತ್ರಕ್ಕೆ ಪೈಪೋಟಿಯಿಂದ ಅಭಿಮಾನಿಗಳು ಹಾರಹಾಕುತ್ತಿದ್ದರು.
ನಂತರ ಚಿತ್ರ ವೀಕ್ಷಿಸಿದ ರಜನಿ ಅಭಿಮಾನಿಗಳು ಪ್ರಥಮ ಪ್ರಯತ್ನದಲ್ಲೆ ಒಳ್ಳೆ ಚಿತ್ರ ಮಾಡಿದ್ದೀರ. ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ ಚಿತ್ರು ಯಶಸ್ವಿಯಾಗಲೆಂದು ಶುಭ ಹಾರೈಸಿದರು.